September 9, 2025
sathvikanudi - ch tech giant

ಚಿಕ್ಕಮಗಳೂರಿನಲ್ಲಿ ಕಾಡಾನೆ ದಾಳಿಗೆ ಮತ್ತೊಬ್ಬ ರೈತ ಬಳಿ: ಅರಣ್ಯ ಇಲಾಖೆಯ ನಿರ್ಲಕ್ಷ್ಯಕ್ಕೆ ಸಾರ್ವಜನಿಕ ಆಕ್ರೋಶ!?

Spread the love



ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಡಾನೆ ದಾಳಿಗಳ ಹಿನ್ನಲೆಯಲ್ಲಿ ಜನಜೀವನ ಭೀತಿಯಲ್ಲಿ  ಸಿಲುಕಿದ್ದು, ಅರಣ್ಯ ಇಲಾಖೆಯ ನಿರ್ಲಕ್ಷ್ಯ ನಿಂದನೆಗೆ ಗುರಿಯಾಗಿದೆ. ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ಅಂಡುವಾನೆ ಗ್ರಾಮದಲ್ಲಿ ಭಾನುವಾರ ಬೆಳಿಗ್ಗೆ 65 ವರ್ಷದ ರೈತ ಸುಬ್ರಾಯಗೌಡ ಮೇಲೆ ಆನೆ ದಾಳಿ ನಡೆಸಿ ಕೊಂದುಹಾಕಿದೆ. ಇದಕ್ಕೂ ಮೊದಲು ಶನಿವಾರ ಮೂಡಿಗೆರೆ-ಬೇಲೂರು ಗಡಿಯಲ್ಲಿ 25ಕ್ಕೂ ಹೆಚ್ಚು ಕಾಡಾನೆಗಳು ಕಾಣಿಸಿಕೊಂಡಿದ್ದರೂ, ಅರಣ್ಯ ಇಲಾಖೆ ಸೂಕ್ತ ಮುನ್ನೆಚ್ಚರಿಕೆ ಕೈಗೊಂಡಿಲ್ಲ ಎಂಬುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ಈ ಹತ್ಯೆಗೆ ಕಾರಣವಾದ ಅರಣ್ಯ ಇಲಾಖೆಯ ನಿರ್ಲಕ್ಷ್ಯದ ವಿರುದ್ಧ ಮಲೆನಾಡಿನ ಜನತೆ ತೀವ್ರ ಪ್ರತಿಭಟನೆಗೆ ಇಳಿದಿದ್ದಾರೆ. ಬಾಳೆಹೊನ್ನೂರಿನ ಅರಣ್ಯ ಕಚೇರಿ ಎದುರು ಸಾರ್ವಜನಿಕರು ಜಮಾವಣೆಗೊಂಡು, “ಅರಣ್ಯ ಇಲಾಖೆಯ ನಿರ್ಲಕ್ಷ್ಯ ನಿಂದಲೇ ಈ ದುರ್ಘಟನೆ” ಎಂದು ಘೋಷಣೆ ಕೂಗಿದರು. ಸ್ಥಳೀಯ ಹಿತರಕ್ಷಣಾ ವೇದಿಕೆಗಳು ನೇತೃತ್ವದಲ್ಲಿ ಪ್ರತಿಭಟನೆ ಶಕ್ತಿಯಾಗಿ ನಡೆಯಿತು.

ಪರಿಣಾಮವಾಗಿ ಬಾಳೆಹೊನ್ನೂರಿನ ಖಾಸಗಿ ಶಾಲೆಗಳಿಗೆ ರಜೆ ಘೋಷಿಸಲಾಯಿತು. ಅಲ್ಲದೆ ಚಿಕ್ಕಮಗಳೂರು-ಶೃಂಗೇರಿ ರಾಜ್ಯ ಹೆದ್ದಾರಿ ತಡೆಯಲಾಯಿತು, ಇದರಿಂದಾಗಿ ವಾಹನ ಸಂಚಾರ ಸ್ಥಗಿತಗೊಂಡು ಜನರಿಗೆ ತೊಂದರೆ ಉಂಟಾಯಿತು.

ಅರಣ್ಯಾಧಿಕಾರಿಗಳು ಜನರನ್ನು ಸ್ಪಂದಿಸದೇ ನಿರ್ಲಕ್ಷ್ಯ ಧೋರಣೆ ತೋರಿದ್ದು, ಜನರ ಆತಂಕವನ್ನು ತೀವ್ರಗೊಳಿಸಿದೆ. ತಮ್ಮ ಪ್ರದೇಶದಲ್ಲಿ ದಿನೇದಿನಕ್ಕೆ ಆನೆ ದಾಳಿಗಳು ಹೆಚ್ಚಾಗುತ್ತಿರುವುದು, ಜೀವ ಹಾನಿ, ಆಸ್ತಿ ಹಾನಿ ಸತತವಾಗಿ ನಡೆಯುತ್ತಿರುವುದು ಜನರನ್ನು ಕೋಪಕ್ಕೆ ಕಾರಣವಾಗಿದೆ. ಅರಣ್ಯ ಇಲಾಖೆ ಮಾತ್ರ ಕೇವಲ ಆನೆ ಹಟವಾಡಿಕೆ ತಡೆಗಟ್ಟುವ ಹೆಸರಿನಲ್ಲಿ ಕಾಗದದ ಮೇಲೆ ಯೋಜನೆ ರೂಪಿಸಿ ತುದಿಗಾಲಲ್ಲಿ ನಿಂತಂತೆ ವರ್ತಿಸುತ್ತಿರುವುದನ್ನು ಮನ್ನಿಸಲಾಗದು ಎಂದು ಜನರು ಹಠವಾಗಿ ಹೇಳಿದ್ದಾರೆ.

ಸ್ಥಳೀಯರು ತಕ್ಷಣ ದಾಳಿಗೆ ದುರಂತದ ನೈಜ ಕಾರಣವಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು, ಮೃತರ ಕುಟುಂಬಕ್ಕೆ ಪರಿಹಾರ ನೀಡಬೇಕು ಹಾಗೂ ಕಾಡಾನೆ ಸಂಚಾರಕ್ಕೆ ತಡೆ ನೀಡಲು ತ್ವರಿತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಇಲ್ಲವಾದರೆ ಜಿಲ್ಲಾಮಟ್ಟದ ಬಹಿರಂಗ ಆಂದೋಲನ ಎಚ್ಚರಿಕೆ ನೀಡಿದ್ದಾರೆ.✍🏻

WhatsApp Image 2025-06-21 at 19.57.59
Trending Now