February 12, 2026
Breaking News

ಅಯ್ಯಪ್ಪಸ್ವಾಮಿ ಮಾಲಾಧಾರಿಗಳಿಗೆ ಮುಸ್ಲಿಂ ಮುಖಂಡನಿಂದ ಅನ್ನಸಂತರ್ಪಣೆ: ಭಾವೈಕ್ಯತೆ ಮೆರೆದ ಕರೀಂಸಾಬ್ …!?

Spread the love


ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಕವಿತಾಳದಲ್ಲಿ ಮುಸ್ಲಿಂ ಮುಖಂಡ ಅಬ್ದುಲ್ ಕರೀಂ ಸಾಬ್ ತಮ್ಮ ಮನೆಯಲ್ಲಿ ಅಯ್ಯಪ್ಪಸ್ವಾಮಿ ಮಾಲಾಧಾರಿಗಳಿಗೆ ಅನ್ನಸಂತರ್ಪಣೆ ಮಾಡಿ ಧಾರ್ಮಿಕ ಭಾವೈಕ್ಯತೆ ಮತ್ತು ಸಹಿಷ್ಣುತೆಯನ್ನು ಮೆರೆದಿದ್ದಾರೆ. ಕಳೆದ ಮೂರು ವರ್ಷಗಳಿಂದ ಈ ಕಾರ್ಯ ನಿರಂತರವಾಗಿ ನಡೆಸುತ್ತಿರುವ ಕರೀಂಸಾಬ್, ಈ ವರ್ಷವೂ ಕವಿತಾಳ ಮತ್ತು ಪಾತಾಪೂರದ ಅಯ್ಯಪ್ಪಸ್ವಾಮಿ ಪೀಠದ 40ಕ್ಕೂ ಹೆಚ್ಚು ಮಾಲಾಧಾರಿಗಳಿಗೆ ಹೋಳಿಗೆ, ತುಪ್ಪ, ಲಾಡು ಮತ್ತು ವಿವಿಧ ತಿನಿಸುಗಳನ್ನು ತಯಾರಿಸಿ, ಸ್ವತಃ ಬಡಿಸುವ ಮೂಲಕ ತಮ್ಮ ಮೌಲ್ಯಾಧಾರಿತ ಸೇವೆಯನ್ನು ಮುಂದುವರಿಸಿದ್ದಾರೆ.

ಇವುಗಳಿಗೆ ಮಾಲಾಧಾರಿಗಳಿಂದ ಭಾವಪೂರ್ಣ ಸ್ವೀಕೃತಿ ದೊರೆಯುವುದರ ಜೊತೆಗೆ, ಕರೀಂಸಾಬ್ ಅವರ ಕಾರ್ಯವು ಸೌಹಾರ್ದತೆ ಮತ್ತು ಸಮಾನತೆಯ ಒಂದು ಉತ್ತಮ ಮಾದರಿಯಾಗಿ ಪರಿಣಮಿಸಿದೆ. ಧರ್ಮ, ಜಾತಿ ಮತ್ತು ಭಿನ್ನತೆಗಳ ಮೇಲಿಲ್ಲದೆ ಕೇವಲ ಮಾನವೀಯತೆಯನ್ನು ಕೇಂದ್ರಬಿಂದುಗೊಳಿಸಿ ಅವರ ಸೇವೆ ಉಲ್ಲೇಖನೀಯವಾಗಿದೆ.

WhatsApp Image 2025-06-21 at 19.57.59