March 3, 2026
Spread the love

ತುಮಕೂರು :

ಪಾವಗಡ: ಆಸ್ತಿಗಾಗಿ ತಾಯಿಯನ್ನೇ ಕೊಲೆ ಮಾಡಿರುವ ದಾರುಣ ಘಟನೆ ಪಾವಗಡ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ. ಚಂದ್ರಕ್ಕ (55) ಎಂಬುವರನ್ನು ಅವರ ಇಬ್ಬರು ಪುತ್ರರು ಅಂಜಿ ಮತ್ತು ಪ್ರಭಾಕರ್ ಆರೋಪಿಗಳು ಎಂದು ಗುರುತಿಸಲಾಗಿದೆ. ತಾಯಿ ಚಂದ್ರಕ್ಕ ಐದು ಎಕರೆ ಜಮೀನು ಮಗಳ ಹೆಸರಿಗೆ ಬರೆದುಕೊಡಲು ಸಿದ್ಧರಾಗಿದ್ದರು. ಆದರೆ, ಇದನ್ನು ಸಹಿಸಿಕೊಳ್ಳಲಾರದೇ ಇಬ್ಬರು ಮಕ್ಕಳು ಈ ಕೃತ್ಯಕ್ಕೆ ಕೈ ಹಾಕಿದ್ದಾರೆ.

ಸ್ಥಳೀಯರು ನೀಡಿದ ಮಾಹಿತಿಯಂತೆ, ಚಂದ್ರಕ್ಕಗೆ ಮಗಳ ಮೇಲೆ ತುಂಬಾ ವಿಶ್ವಾಸ ಇದ್ದು, ಆಕೆಗೆ ಜಮೀನು ಬರೆದುಕೊಡುವುದಾಗಿ ನಿರ್ಧರಿಸಿದ್ದರು. ಇದರಿಂದ ಕೋಪಗೊಂಡಿದ್ದ ಅಂಜಿ ಮತ್ತು ಪ್ರಭಾಕರ್ ತಾಯಿ ಚಂದ್ರಕ್ಕನಾ ಜತೆ ಆಗಾಗ್ಗೆ ಜಗಳವಾಡುತ್ತಿದ್ದರೆಂದು ತಿಳಿದು ಬಂದಿದೆ. ಕೊನೆಗೆ, ಆಸ್ತಿಗಾಗಿ ಈ ಅಮಾನವೀಯ ಕೃತ್ಯ ಎಸಗಿದ್ದಾರೆ.

ಪೊಲೀಸರು ಆರೋಪಿಗಳನ್ನು ಎಲ್ಲೋಟಿ ಗ್ರಾಮದಲ್ಲಿ ಬಂಧಿಸಿದ್ದಾರೆ. ಪ್ರಕರಣವನ್ನು ದಾಖಲಿಸಿಕೊಂಡು, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಈ ಘಟನೆಯು ಸಮುದಾಯದಲ್ಲಿ ಆಘಾತದ ಸ್ಥಿತಿಯನ್ನುಂಟುಮಾಡಿದ್ದು, ತೀವ್ರ ಖಂಡನೆ ವ್ಯಕ್ತವಾಗಿದೆ.

ಈ ದಾರುಣ ಘಟನೆಯು ಆಸ್ತಿ, ಕುಟುಂಬ ಸಂಬಂಧಗಳಲ್ಲಿ ಸಮನ್ವಯದ ಕೊರತೆಯನ್ನು ಮನದಟ್ಟಾಗಿಸುತ್ತದೆ.

Leave a Reply

Your email address will not be published. Required fields are marked *