December 12, 2025
Breaking News

ಆಹಾರ ಸುರಕ್ಷತಾ ಅಧಿಕಾರಿ ಎಪಿಎಂಸಿಗೆ ದಿಢೀರ್ ಭೇಟಿ

Spread the love

ಮೈಸೂರು :

ಹೆಚ್. ಡಿ. ಕೋಟೆ ತಾಲೂಕಿನ ಆಹಾರ ಸುರಕ್ಷತಾ ಅಧಿಕಾರಿ ಟಿ. ರವಿಕುಮಾರ್ ಮತ್ತು ಅವರ ತಂಡ ಪಟ್ಟಣದಲ್ಲಿರುವ ಎಪಿಎಂಸಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು ಮತ್ತು ವ್ಯಾಪಾರಸ್ಥರಿಗೆ ನೋಟಿಸ್ ಜಾರಿ ಮಾಡಿದರು. ಈ ವೇಳೆ ಅವರು, ಗ್ರಾಹಕರಿಗೆ ಉತ್ತಮ ಗುಣಮಟ್ಟದ ಮತ್ತು ಶುದ್ಧವಾದ ತರಕಾರಿಗಳನ್ನು ಮಾತ್ರ ಮಾರಾಟ ಮಾಡಬೇಕು ಎಂದು ಸೂಚಿಸಿದರು.



ಯಾವುದೇ ಕಾರಣಕ್ಕೂ ಕೊಳೆತಿರುವ ತರಕಾರಿಗಳನ್ನು ಮಾರಾಟ ಮಾಡಬಾರದು ಹಾಗೂ ಕೊಳೆತಿರುವ ಮತ್ತು ಬೇಡದ ತರಕಾರಿಗಳನ್ನು ಹಾಗೂ ಟೀ ಕುಡಿದ ಪ್ಲಾಸ್ಟಿಕ್ ಲೋಟಗಳನ್ನು ಒಂದು ಕಡೆ ಶೇಖರಣೆ ಮಾಡಬೇಕು ಎಂದು ತಿಳಿಸಿದರು.

ಆಹಾರ ಸುರಕ್ಷತಾ ಅಧಿಕಾರಿಗಳು ಈ ವೇಳೆಗೆ ವ್ಯಾಪಾರಸ್ಥರೊಂದಿಗೆ ಮಾತುಕತೆ ನಡೆಸಿ, ಆಹಾರದ ಗುಣಮಟ್ಟ ಮತ್ತು ಶುದ್ಧತೆಯ ಬಗ್ಗೆ ಹೆಚ್ಚು ಜಾಗ್ರತೆಯಿರಲು ಸೂಚಿಸಿದರು.

ಈ ಕ್ರಮಗಳಿಂದ ಗ್ರಾಹಕರ ಆರೋಗ್ಯವನ್ನು ಕಾಯುವುದರ ಜೊತೆಗೆ, ಮಾರಾಟದ ತತ್ವಗಳನ್ನೂ ಉಲ್ಲಂಘಿಸದಂತೆ ಕಾಪಾಡುವುದೆಂದು ಅಧಿಕಾರಿಗಳು ತಿಳಿಸಿದರು.

WhatsApp Image 2025-06-21 at 19.57.59