March 3, 2026
Spread the love

ತಮಿಳುನಾಡಿನಲ್ಲಿ 1997ರಲ್ಲಿ 60 ರೂ. ಕದ್ದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು 27 ವರ್ಷಗಳ ಬಳಿಕ ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ಶಿವಕಾಶಿಯಲ್ಲಿ ನಡೆದಿದ್ದು, ಆರೋಪಿಯ ಹೆಸರು ಪನ್ನೀರಸೆಲ್ವಂ (55) ಎಂಬುದಾಗಿದೆ.

1997ರಲ್ಲಿ ಪನ್ನೀರಸೆಲ್ವಂ 60 ರೂ. ಕದ್ದ ನಂತರ ತಲೆಮರೆಸಿಕೊಂಡಿದ್ದಾನೆ. ಈ ಹಿಂದೆ ಪ್ರಕರಣವನ್ನು ಮುಕ್ತಾಯಗೊಳಿಸದೆ ಬಾಕಿ ಉಳಿದಿದ್ದರಿಂದ, ಮಧುರೈ ಪೊಲೀಸರು ಅದರ ಬಗ್ಗೆ ವಿಶೇಷ ತನಿಖಾ ತಂಡವನ್ನು ರಚಿಸಿದರು.

ಪೊಲೀಸರು ಆತನನ್ನು ಪತ್ತೆಹಚ್ಚಲು ಜನಸಂಖ್ಯಾ ಮಾಪನಾಧಿಕಾರಿಗಳ ನೆಪದಲ್ಲಿ ಆತನ ಮನೆಗೆ ತೆರಳಿದರು. ಪನ್ನೀರಸೆಲ್ವಂನ ಹಳೆಯ ಫೋಟೋವನ್ನು ಬಳಸಿಕೊಂಡು, ಆತನನ್ನು ಗುರುತಿಸಿದ ನಂತರ ಬಂಧಿಸಿದರು.

Leave a Reply

Your email address will not be published. Required fields are marked *