December 6, 2025
Breaking News

ಶಿವಮೊಗ್ಗ ಬಸ್ ನಿಲ್ದಾಣದಲ್ಲಿ ಮಹಿಳೆಯ 15 ಗ್ರಾಂ ಚಿನ್ನಾಭರಣ ಕಳವು…..!?

Spread the love



ಶಿವಮೊಗ್ಗದ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಚಿನ್ನಾಭರಣ ಕಳ್ಳತನ ಮುಂದುವರೆದಿದ್ದು, ಇದೀಗ ಮತ್ತೊಮ್ಮೆ ಇಂತಹ ಘಟನೆ ವರದಿಯಾಗಿದೆ. ಹರಿಹರ ತಾಲೂಕಿನ ಮಲೆಬೆನ್ನೂರಿನ ಕೊಕನೂರು ಗ್ರಾಮದಿಂದ ಸಾಗರದಲ್ಲಿ ನಡೆದ ಮದುವೆ ಕಾರ್ಯಕ್ರಮಕ್ಕೆ ಆಗಮಿಸಿದ ಕುಟುಂಬ, ಮದುವೆ ಮುಗಿಸಿಕೊಂಡು ಹರಿಹರಕ್ಕೆ ಹಿಂತಿರುಗುವ ವೇಳೆಗೆ, ಈ ಕಳ್ಳತನಕ್ಕೆ ಗುರಿಯಾಗಿದೆ.



ಸಾಗರದಿಂದ ಖಾಸಗಿ ಬಸ್ ಮೂಲಕ ಶಿವಮೊಗ್ಗಕ್ಕೆ ಬಂದ ಮಹಿಳೆ, ಹರಿಹರಕ್ಕೆ ಹೋಗಲು ಕೆಎಸ್ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಬಸ್ ಹತ್ತುವ ಸಿದ್ಧತೆಯಲ್ಲಿದ್ದಾಗ ಈ ಘಟನೆ ನಡೆದಿದೆ. ಬಸ್ ನಲ್ಲಿನ ಹೆಚ್ಚಾದ ಜನರ ಕಾರಣಕ್ಕೆ, 30 ವರ್ಷದ ಮಹಿಳೆಯ ವ್ಯಾನಿಟಿ ಬ್ಯಾಗ್‌ನ ಜಿಪ್‌ ಅನ್ನು ಯಾರೋ ತೆರೆಯಿದ್ದು, ಬ್ಯಾಗ್ನಲ್ಲಿದ್ದ 15 ಗ್ರಾಂ ಚಿನ್ನದ ಹಾರ ಕಳೆದುಹೋದದ್ದು ಬೆಳಕಿಗೆ ಬಂದಿದೆ.

ಕಳಕೊಂಡ ಚಿನ್ನದ ಹಾರದ ಮೌಲ್ಯವನ್ನು 1,10,000 ರೂ. ಎಂದು ಅಂದಾಜಿಸಲಾಗಿದೆ. ಈ ಸಂಬಂಧ ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದು, ಬಸ್ ನಿಲ್ದಾಣದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲು ಸಿದ್ಧತೆ ನಡೆಸಿದ್ದಾರೆ. ಜನರ ಸಂಖ್ಯೆ ಹೆಚ್ಚಿರುವ ಸ್ಥಳಗಳಲ್ಲಿ ಕಳ್ಳತನ ಹೆಚ್ಚಾಗುತ್ತಿರುವುದರಿಂದ ಸಾರ್ವಜನಿಕರು ತಮ್ಮ ಮೌಲ್ಯದ ವಸ್ತುಗಳಿಗೆ ಹೆಚ್ಚಿನ ಜಾಗೃತತೆ ತೋರಬೇಕೆಂದು ಪೊಲೀಸರು ಮನವಿ ಮಾಡಿದ್ದಾರೆ.

WhatsApp Image 2025-06-21 at 19.57.59