December 6, 2025
Breaking News

ಆಟದ ಮೈದಾನದಲ್ಲೇ ಕುಸಿದು ಬಿದ್ದು ಸಾವಿಗೀಡಾದ ವಿದ್ಯಾರ್ಥಿ……

Spread the love

ತುಮಕೂರು ತಾಲೂಕಿನ ಸಿರಿವಾರದಲ್ಲಿ ವಿದ್ಯಾರ್ಥಿಯೋರ್ವ ಆಟದ ಮೈದಾನದಲ್ಲೇ ಕುಸಿದು ಬಿದ್ದು ಸಾವಿಗೀಡಾದ ದಾರುಣ ಘಟನೆ ನಡೆದಿದೆ. 9ನೇ ತರಗತಿಯ ಧನು (14) ಮೃತ ವಿದ್ಯಾರ್ಥಿ. ಸಿರಿವಾರದ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ತನ್ನ ಗೆಳೆಯರೊಂದಿಗೆ ವಾಲಿಬಾಲ್‌ ಆಡುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಧನು ಕುಸಿದು ಬಿದ್ದನು. ಗೆಳೆಯರು ಅವನ ಹತ್ತಿರ ಬಂದು ನೋಡಿದಾಗ ಅವನ ಉಸಿರಾಟ ನಿಂತಿರುವುದನ್ನು ಗಮನಿಸಿದರು. ತಕ್ಷಣವೇ ಅಧ್ಯಾಪಕರು ಧನುವಿನ ಪೋಷಕರಿಗೆ ಮಾಹಿತಿ ನೀಡಿ, ಆತನನ್ನು ಆಸ್ಪತ್ರೆಗೆ ಕರೆದೊಯ್ದರು. ಆದರೆ, ಚಿಕಿತ್ಸಾ ಸಮಯದಲ್ಲಿ ವೈದ್ಯರು ಧನು ಮೃತಪಟ್ಟಿರುವುದಾಗಿ ಘೋಷಿಸಿದರು.

ಈ ಘಟನೆಯು ಎಲ್ಲಾ ವಿದ್ಯಾರ್ಥಿಗಳ ಮನಸ್ಸಿನಲ್ಲಿ ದುಃಖವನ್ನುಂಟುಮಾಡಿದೆ. ಧನು ಒಬ್ಬ ಚಟುವಟಿಕೆಯಲ್ಲಿ ತೊಡಗಿದ್ದ ವಿದ್ಯಾರ್ಥಿ, ಹಾಗೂ ಉತ್ತಮ ಕ್ರೀಡಾಪಟುವಾಗಿದ್ದನೆಂದು ಶಾಲೆಯ ಅಧ್ಯಾಪಕರು ಹಾಗೂ ಸ್ನೇಹಿತರು ತಿಳಿಸಿದರು. ಹೆಬ್ಬೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ. ವಿದ್ಯಾವಂತ, ಉತ್ಸಾಹಿ ಧನು ನಿಧನವು ತುಂಬಾ ಬೇಸರದ ವಿಷಯವಾಗಿದೆ ಎಂದು ಸ್ಥಳೀಯರು ಹಾಗೂ ಶಾಲೆಯ ಆಡಳಿತ ಮಂಡಳಿ ಸಂತಾಪ ವ್ಯಕ್ತಪಡಿಸಿದ್ದಾರೆ.

screenshot_20240620_155239_lokal_copy_342x2143905607539960218536.png