December 16, 2025
Breaking News

ಶಿವಮೊಗ್ಗದಲ್ಲಿ ಬಂಜಾರ ಸಮುದಾಯ ಮೀಸಲಾತಿ ಆಗ್ರಹ…!?

Spread the love



ಶಿವಮೊಗ್ಗ :

ಜಿಲ್ಲಾ ಬಂಜಾರ ಸಮಾಜ ಹಾಗೂ ಒಳ ಮೀಸಲಾತಿ ಜಾರಿ ವಿರೋಧಿ ಸಮಿತಿ ನೇತೃತ್ವದಲ್ಲಿ, ಬಂಜಾರ ಸಮುದಾಯಕ್ಕೆ ಮೀಸಲಾತಿ ನೀಡುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿಯವರೆಗೆ ಶಿವಮೊಗ್ಗ ಗ್ರಾಮಾಂತರ  ಶಾಸಕರಾದ ಸನ್ಮಾನ್ಯ ಶ್ರೀ ಶಾರದಾ ಪುರ್ಯಾನಾಯಕ್ ರವರು  ತಮ್ಮ ಸಮಾಜದ ಒಳಿತಿಗಾಗಿ ಕಾಲ್ನಡಿಗೆಯಲ್ಲಿ  ಪ್ರತಿಭಟನೆಗೆ ಪಾಲ್ಗೊಂಡಿದ್ದರು. ಪ್ರತಿಭಟನಾಕಾರರು ಸರ್ಕಾರದ ಧೋರಣೆಯನ್ನು ವಿರೋಧಿಸಿ ಬೃಹತ್ ಜನಸಮುದಾಯವನ್ನು ಒಟ್ಟುಗೂಡಿಸಿದರು.



ಜಿಲ್ಲಾಧಿಕಾರಿ ಕಚೇರಿಯ ಮುಂಭಾಗದಲ್ಲಿ ನಡೆದ ಸಭೆಯಲ್ಲಿ, ಸಮಾಜದ ಮುಖಂಡರು ಬಂಜಾರ ಸಮುದಾಯದ ಹಕ್ಕುಗಳನ್ನು ನಿರ್ಲಕ್ಷಿಸುವುದನ್ನು ತೀವ್ರವಾಗಿ ಟೀಕಿಸಿದರು. “ಸಮುದಾಯವು ಹಲವಾರು ವರ್ಷಗಳಿಂದ ಸಾಮಾಜಿಕ ಹಾಗೂ ಆರ್ಥಿಕ ಹಿಂದುಳಿದ ಸ್ಥಿತಿಯಲ್ಲಿದ್ದು, ಮೀಸಲಾತಿಯ ಜಾರಿಗೆ ಮಾತ್ರ ಸಮಾನತೆ ಸಾಧ್ಯ,” ಎಂದು ಅವರು ಹೇಳಿದರು.



ಪ್ರತಿಭಟನೆಯಲ್ಲಿ ಬಂಜಾರ ಸಮುದಾಯದ ಅನೇಕರು ತಮ್ಮ ಬೇಡಿಕೆಗಳನ್ನು ಹೇಳಿಕೊಂಡು ಸರ್ಕಾರದ ವಿರುದ್ಧ ಘೋಷಣೆಗಳನ್ನು ನೀಡಿದರು. “ಮೀಸಲಾತಿ ಜಾರಿ ಮಾಡುವ ಮೂಲಕ ನಮ್ಮ ಸಮುದಾಯದ ಅಭಿವೃದ್ಧಿ ಸಾಧ್ಯ,” ಎಂದು ಹೆತ್ತಿ ಹೇಳಿದರು.

ಪ್ರತಿಭಟನೆ ಆಕರ್ಷಕವಾಗಿ ನಡೆದಿದ್ದು, ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು. ಸರಕಾರ ತಕ್ಷಣವೇ ಬಂಜಾರ ಸಮುದಾಯದ ಬೇಡಿಕೆಗಳನ್ನು ಗಮನಿಸಿ, ಕ್ರಮಕೈಗೊಳ್ಳಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.

WhatsApp Image 2025-06-21 at 19.57.59