September 9, 2025
sathvikanudi - ch tech giant

ಹನುಮಾನ್ ವ್ಯಾಯಾಮ ಶಾಲೆಯ ಮಲ್ಲಪಟುಗಳು ಶನಿವಾರ ವಿಶೇಷ ಅಲಂಕಾರ…

Spread the love

ತುಮಕೂರು

ಹನುಮಾನ್ ವ್ಯಾಯಾಮ ಶಾಲೆಯ ಮಲ್ಲಪಟುಗಳು ಶನಿವಾರ ವಿಶ್ವವಿಖ್ಯಾತ ಏಕಶಿಲಾ ಬೆಟ್ಟದ  ತುದಿಯ ನವಿಲು ದೋಣಿ ಸಮೀಪ ಇರುವ ಆಂಜನೇಯ ವಿಗ್ರಹಕ್ಕೆ ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಿದರು. ಈ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರೂ ಆಂಜನೇಯನ ಕೃಪೆಗೆ ಪಾತ್ರರಾದರು.

ಅವರು ಏಸಿ ಕಚೇರಿಯಿಂದ ಆರಂಭವಾಗುವ ಕೋಟೆಯ ಬಾಗಿಲು ಸಮೀಪ ಇರುವ ನೀಲಿಗಿರಿ ತೋಪಿನಲ್ಲೂ ಒಂದು ಆಂಜನೇಯನ ವಿಗ್ರಹ, ಕೋದಂಡರಾಮ ಸ್ವಾಮಿ ದೇವಾಲಯದ ಒಳಭಾಗದಲ್ಲಿ ಮತ್ತೊಂದು ಆಂಜನೇಯ ವಿಗ್ರಹ, ಹಳೆ ತಹಶೀಲ್ದಾರ್ ಕಚೇರಿಯ ಕೆಳಭಾಗದಲ್ಲಿರುವ ಆಂಜನೇಯ ವಿಗ್ರಹಗಳಿಗೆ ಪೂಜೆ ಸಲ್ಲಿಸಿದರು.

ಹನುಮಾನ್ ವ್ಯಾಯಾಮ ಶಾಲೆಯ ಮಲ್ಲಪಟುಗಳು ಈ ದೇವಾಲಯಗಳ ಅಲಂಕಾರಕ್ಕೆ ವಿಶೇಷ ಗಮನ ಹರಿಸಿದ್ದು, ಪ್ರತಿಯೊಬ್ಬ ಭಕ್ತರೂ ಆಂಜನೇಯನ ಸಾನ್ನಿಧ್ಯದಲ್ಲಿ ಶಕ್ತಿ, ಸಹಸ್ರ ಹಾಗೂ ಅಭಯವನ್ನು ಪಡೆದರು. ಈ ವಿಶೇಷ ಪೂಜಾ ಕಾರ್ಯಕ್ರಮವು ಭಕ್ತರಲ್ಲಿ ಭಕ್ತಿ ಮತ್ತು ಶ್ರದ್ಧೆಯನ್ನು ಉಂಟುಮಾಡಿತು.

WhatsApp Image 2025-06-21 at 19.57.59
Trending Now