October 24, 2025
sathvikanudi - ch tech giant

ತ್ರಿಬಲ್ ಮರ್ಡರ್: ಹಳೆ ವೈಷಮ್ಯಕ್ಕೆ ಮೂವರು ಬಲಿ – ಏಳು ಮಂದಿ ಆರೋಪಿಗಳು ಪೊಲೀಸ್ ವಶಕ್ಕೆ!?

Spread the love



ಕಲಬುರಗಿ ಜಿಲ್ಲೆಯಲ್ಲಿ ಮಂಗಳವಾರ ರಾತ್ರಿ ಸಂಭವಿಸಿದ ಹೃದಯ ವಿದ್ರಾವಕ ಘಟನೆ ಇದಾಗಿದ್ದು, ಮೂರು ಜೀವಗಳನ್ನು ಬಲಿಯಾದ ‘ತ್ರಿಬಲ್ ಮರ್ಡರ್’ ಪ್ರಕರಣದಲ್ಲಿ ಪ್ರಗತಿ ಕಂಡಿದೆ. ಹಳೆ ವೈಷಮ್ಯದ ಹಿನ್ನೆಲೆ ದಾಳಿ ನಡೆದಿದ್ದು, ಕಲಬುರಗಿ ತಾಲೂಕಿನ ಪಟ್ನಾ ಗ್ರಾಮದ ಡಾಬಾ ಬಳಿ ಮೂವರು ಸಂಬಂಧಿಕರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ.

ಘಟನೆಯಲ್ಲಿ ಸಾವಿಗೀಡಾದವರನ್ನು ಸಿದ್ಧಾರೂಢ (32), ಜಗದೀಶ (25) ಮತ್ತು ರಾಮಚಂದ್ರ (35) ಎಂದು ಗುರುತಿಸಲಾಗಿದೆ. ಈ ಮೂವರು ಸಂಬಂಧಿಕರು ಆಗಿದ್ದು, ಘಟನೆಯ ವೇಳೆ ಡಾಬಾದಲ್ಲಿ ಕುಳಿತಿದ್ದರು. ದಾಳಿಕೋರರು ತೀವ್ರ ಹಿಂಸಾತ್ಮಕವಾಗಿ ನಡವಳಿಕೆ ತೋರಿದ್ದು, ಮಾರಕಾಸ್ತ್ರಗಳಿಂದ ದುಷ್ಕೃತ್ಯವೆಸಗಿದಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಥಳೀಯರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.

ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದಾಗ, ಸುಳಿವುಗಳನ್ನು ಆಧರಿಸಿ ಪ್ರಮುಖ ಆರೋಪಿಗಳು ಸೇರಿದಂತೆ ಏಳು ಜನರನ್ನು ಗುರುತಿಸಿ ಬಂಧಿಸಿದ್ದಾರೆ. ಈರಣ್ಣ ತಾಳಿಕೋಟೆ ಮತ್ತು ರಾಚಣ್ಣ ಸೇರಿದಂತೆ ಈ ಏಳು ಮಂದಿ ಆರೋಪಿಗಳನ್ನು ಸಬ್‌ಅರ್ಬನ್ ಠಾಣೆ ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಅವರ ವಿರುದ್ಧ ಹತ್ಯೆಗೆ ಸಂಚು ರೂಪಿಸಿದ್ದೆನೆಂಬ ಶಂಕೆ ವ್ಯಕ್ತವಾಗಿದೆ.

ಹತ್ಯೆಗೆ ನಿಖರವಾದ ಉದ್ದೇಶ ಇನ್ನೂ ಸ್ಪಷ್ಟವಾಗಿಲ್ಲದಿದ್ದರೂ, ಸ್ಥಳೀಯ ಮೂಲಗಳ ಪ್ರಕಾರ ಈ ಪ್ರಕರಣ ಹಳೆ ವೈಷಮ್ಯ ಹಾಗೂ ವೈಯಕ್ತಿಕ ಶತ್ರುತೆಯಿಂದ ಉಂಟಾದ್ದಾಗಬಹುದು ಎಂದು ಶಂಕಿಸಲಾಗಿದೆ. ಬಂಧಿತರಿಂದ ಹೆಚ್ಚಿನ ಮಾಹಿತಿಯ ನಿರೀಕ್ಷೆಯಿದ್ದು, ಪ್ರಕರಣದ ಬೆನ್ನು ಹತ್ತಲು ಪೊಲೀಸರು ನಿರಂತರ ಜಾಡುಹಿಡಿಯುತ್ತಿದ್ದಾರೆ.

ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಗ್ರಾಮದಲ್ಲಿ ಶಾಂತಿ ಕಾಪಾಡಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಪೊಲೀಸರು ಸಾರ್ವಜನಿಕರಿಗೆ ಸಹಕಾರ ಕೋರಿ, ಯಾವುದೇ ಗೊಂದಲಕ್ಕೆ ಅವಕಾಶ ನೀಡದಂತೆ ಎಚ್ಚರಿಕೆ ವಹಿಸಿದ್ದಾರೆ.

ವರದಿ: ಕಲಬುರಗಿ ಪ್ರತಿನಿಧಿ

WhatsApp Image 2025-06-21 at 19.57.59
Trending Now