December 12, 2025
Breaking News

ಶಿವಮೊಗ್ಗ: ಸಾಲ ತೀರಿಸದೆ ಅಂತಾ ಅಜ್ಜಿಯ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!

Spread the love



ಶಿವಮೊಗ್ಗ :

ಜಿಲ್ಲೆಯ ಕೋಣಂದೂರಿನಲ್ಲಿ ಘಟನೆ ನಡೆಯಿದ್ದು, ಸ್ವಾತಂತ್ರ್ಯ ಹೋರಾಟಗಾರನ ಪತ್ನಿ ಹಾಲಮ್ಮ (86) ಅವರು ಈ ಘಟನೆಯ ಬಲಿ ಆಗಿದ್ದಾರೆ. ಬಿಲ್ಲೇಶ್ವರ ಗ್ರಾಮದ ಫ್ರೀಡಂ ಫೈಟರ್ ಎಸ್. ಚನ್ನವೀರಪ್ಪ ಅವರ ಪತ್ನಿಯಾದ ಹಾಲಮ್ಮ ಕಳೆದ ನಾಲ್ಕು ತಿಂಗಳಿಂದ ಪಿಂಚಣಿ ಪಡೆಯುತ್ತಿರಲಿಲ್ಲ. ಪಿಂಚಣಿ ಆಧಾರದ ಮೇಲೆ ಮಾಡಿದ ಸಾಲದ ಕಂತು ಪಾವತಿಯಾಗದ ಕಾರಣ, ಸಂಬಂಧಿಸಿದ ಬ್ಯಾಂಕ್ ಸಿಬ್ಬಂದಿ ಅವರ ಬಳಿ ಬಂದು ಅವಮಾನಿಸಿ, ಕಿವಿಯೋಲೆಯನ್ನು ತೆಗೆದುಕೊಂಡು ಹೊರದಬ್ಬಿದ ಘಟನೆ ವರದಿಯಾಗಿದೆ.

ಹಾಲಮ್ಮ ತಮ್ಮ ಪಿಂಚಣಿ ಹಣವನ್ನು ಮನೆಯ ದುರಸ್ತಿ ಕಾರ್ಯಗಳಿಗೆ ಬಳಸಲು ಯೋಜಿಸಿದ್ದರು. ಆದರೆ ಕೆಲವು ತಿಂಗಳುಗಳಿಂದ ಹಣ ಬಂದಿದೆ ಎಂದು ಗೋಚರಿಸದೇ ಇದ್ದ ಕಾರಣ ಸಾಲದ ಕಂತು ತೀರಿಸಲಾಗಿರಲಿಲ್ಲ. ಈ ಬಗ್ಗೆ ಬ್ಯಾಂಕ್ ನವರು ಮನೆಯವರಿಗೆ ಯಾವುದೇ ಮುನ್ಸೂಚನೆ ನೀಡದೆ ನೇರವಾಗಿ ಹಾಲಮ್ಮ ಅವರ ಮನೆಯನ್ನು ತಲುಪಿ, ಅವರ ಮೇಲೆ ತೀವ್ರ ಮನಸ್ಥಾಪ ಉಂಟುಮಾಡುವ ರೀತಿಯಲ್ಲಿ ನಿಂದಿಸಿ, ಕಿವಿಯೋಲೆಯನ್ನು ಬಲವಂತವಾಗಿ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.

ಈ ಸಂಬಂಧ ಹಾಲಮ್ಮ ಕುಟುಂಬದವರು ಕೋಣಂದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಯುತ್ತಿದೆ. ಒಂದು ವೃದ್ಧ ಮಹಿಳೆಯೊಂದಿಗೆ ಈ ರೀತಿಯ ಅಮಾನುಷ ವರ್ತನೆ ಖಂಡನೀಯವಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಿರಿಯ ನಾಗರಿಕರ ಹಕ್ಕುಗಳನ್ನು ರಕ್ಷಿಸುವಂತೆ ಅವರು ಅಧಿಕಾರಿಗಳಿಗೆ ಆಗ್ರಹಿಸಿದ್ದಾರೆ.

WhatsApp Image 2025-06-21 at 19.57.59