March 3, 2026
Spread the love



ಕೊಪ್ಪಳ ಜಿಲ್ಲೆಯಲ್ಲಿ ಮತ್ತೊಂದು ದುಃಖದ ಪ್ರೇಮ ಕಥೆ ಆತ್ಮಹತ್ಯೆಯ ರೂಪದಲ್ಲಿ ಅಂತ್ಯ ಕಂಡಿದೆ. ಮನೆಯವರ ವಿರೋಧದ ನಡುವೆ ಪ್ರೀತಿಸಿ ಬಾಳಬೇಕೆಂಬ ಕನಸು ಕಂಡ ಇಬ್ಬರು ಯುವ ಹೃದಯಗಳು, ಕಾಲುವೆಗೆ ಹಾರಿ ಜೀವತ್ಯಾಗ ಮಾಡಿಕೊಂಡ ಘಟನೆ ತೀವ್ರ ದುಃಖವನ್ನು ಮೂಡಿಸಿದೆ.

ಈ ಘಟನೆ ಕೊಪ್ಪಳದ ಯಲಬುರ್ಗಾ ತಾಲೂಕಿನ ಹೊಸಲಿಂಗಪುರ ಹಾಗೂ ಸಣಾಪುರ ಗ್ರಾಮಗಳ ನಡುವೆ ಸಂಭವಿಸಿದ್ದು, ಮೃತಪಟ್ಟವರು ಹೊಸಲಿಂಗಪುರದ ಪ್ರವೀಣ್ ಕುಮಾರ್ (18) ಹಾಗೂ ಸಣಾಪುರದ ಅಂಜಲಿ (18) ಎಂದು ಗುರುತಿಸಲಾಗಿದೆ. ಇಬ್ಬರೂ ಕಳೆದ ಒಂದು ವರ್ಷದಿಂದ ಪ್ರೀತಿಸುತ್ತಿದ್ದು, ತಮ್ಮ ಸಂಬಂಧವನ್ನು ಕುಟುಂಬದವರಿಗೆ ತಿಳಿಸಿದ್ದರು.

ಪ್ರವೀಣ್ ಮತ್ತು ಅಂಜಲಿ ವಿದ್ಯಾರ್ಥಿಗಳು. ತಮ್ಮ ಪ್ರೀತಿಯ ಬಾಂಧವ್ಯವನ್ನು ವೈವಾಹಿಕ ಬದುಕಿಗೆ ಕೊಂಡೊಯ್ಯಲು ನಿರ್ಧಾರ ಮಾಡಿಕೊಂಡು, ಮನೆಯವರ ಒಪ್ಪಿಗೆಗಾಗಿ ಪ್ರಯತ್ನಿಸಿದ್ದರು. ಆದರೆ, ಕುಟುಂಬದಿಂದ ತೀವ್ರ ವಿರೋಧ ಎದುರಾಗಿತ್ತು. ಇಬ್ಬರೂ ಒಂದೇ ಜಾತಿಯವರಾಗಿದ್ದರೂ, ಮನೆಮಾತು, ಆರ್ಥಿಕ ಹಿನ್ನಲೆ ಮತ್ತು ಕುಟುಂಬದ ಮಾನಸಿಕತೆ ಈ ಸಂಬಂಧವನ್ನು ಒಪ್ಪಿಕೊಳ್ಳಲು ಅವಕಾಶ ನೀಡಲಿಲ್ಲ.

ಮನೆಮಂದಿಯ ನಿರಾಸೆಯ ಮಾತು, ನಿರಂತರ ಒತ್ತಡ ಮತ್ತು ಭಾವನಾತ್ಮಕ ತೊಂದರೆಗಳಿಂದ ಮನನೊಂದ ಜೋಡಿ, ಕೊನೆಗೆ ನಿರ್ಧಾರ ತೆಗೆದುಕೊಂಡು ತಮ್ಮ ಜೀವನಕ್ಕೆ ತಾವುಗಲೇ ಅಂತ್ಯ ಮಾಡಿಕೊಂಡಿದ್ದಾರೆ. ಇತ್ತೀಚೆಗೆ, ಇಬ್ಬರೂ ಗ್ರಾಮವಾಸಿಗಳನ್ನು ಬೀದಿಯಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ ಬಳಿಕ, ಅಚಾನಕ್ ಕಾಲುವೆ ಕಡೆಗೆ ತೆರಳಿದ ದೃಶ್ಯವು ಸಿಸಿಟಿವಿಯಲ್ಲಿ ದಾಖಲಾಗಿದೆ. ಸ್ಥಳೀಯರ ಸಹಾಯದಿಂದ ಪೊಲೀಸರು ಮೃತದೇಹಗಳನ್ನು ಮೇಲಕ್ಕೆತ್ತಿದ್ದಾರೆ.

ಈ ಘಟನೆ ಗ್ರಾಮದಲ್ಲಿ ಭಾರೀ ಆಘಾತವನ್ನು ಉಂಟುಮಾಡಿದ್ದು, ಇಬ್ಬರ ಮೃತದೇಹದ ಪಕ್ಕದಲ್ಲಿ ಅವರು ಬರೆದಿದ್ದ ಭಾವನಾತ್ಮಕ ಪತ್ರವೊಂದು ಪತ್ತೆಯಾಗಿದೆ. ಅದರಲ್ಲಿರುವ ವಿಷಯದಿಂದಾಗಿ, ಪ್ರೀತಿಗೆ ಕೊನೆಗೂ ಮನೆಯವರು ಒಪ್ಪಲಿಲ್ಲ ಎಂಬ ನೋವು ಸ್ಪಷ್ಟವಾಗಿದೆ.

ಸ್ಥಳಕ್ಕೆ ಯಲಬುರ್ಗಾ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರೆಸಿದ್ದಾರೆ.

ಇಂತಹ ಘಟನೆಗಳು ಸಮಾಜದಲ್ಲಿ ಪ್ರೀತಿಸುವವರ ಬಗ್ಗೆ ಇನ್ನೂ ಹೆಚ್ಚು ಸಂವೇದನೆ ಹಾಗೂ ಅರಿವು ಮೂಡಬೇಕಾದ ಅಗತ್ಯವಿದೆ. ಕುಟುಂಬದಲ್ಲಿ ಮಕ್ಕಳ ಭಾವನೆಗಳನ್ನು ಅರ್ಥಮಾಡಿಕೊಳ್ಳದೆ ಅವರ ಕನಸುಗಳನ್ನು ಮುರಿಯುವುದು, ಅನೇಕ ನಿರೀಕ್ಷಿತ ಹಾಗೂ ನಿರೀಕ್ಷಿಸದ ದುರ್ಘಟನೆಗಳಿಗೆ ಕಾರಣವಾಗುತ್ತಿದೆ.


ವರದಿ :✍🏻ವಿಜಯ್ ಮುನಿಯಪ್ಪ  (ಕ್ರೈಂ ವರದಿಗಾರರು)

Leave a Reply

Your email address will not be published. Required fields are marked *