September 9, 2025
sathvikanudi - ch tech giant

ಹಾವು ಕಚ್ಚಿ ವ್ಯಕ್ತಿ ಸಾವು…..!?

Spread the love

ತರೀಕೆರೆ :

ತಮ್ಮ ಜಮೀನಿನಲ್ಲಿ ಕೆಲಸ ಮುಗಿಸಿ ಮನೆಗೆ ಬಂದ 44 ವರ್ಷದ ಗಣ್ಯ ನಾಯ್ಕ ಹಾವು ಕಚ್ಚಿದ ಅನುಭವವನ್ನು ಮುಳ್ಳು ಚುಚ್ಚಿದಂತೆ ಭಾವಿಸಿದನು.

ಇದು ಚಿಕ್ಕಮಗಳೂರಿನ ತರೀಕೆರೆ ತಾಲೂಕಿನ ಕರಕುಚ್ಚಿ ಗ್ರಾಮದಲ್ಲಿ ನಡೆದಿದೆ, ಗಣ್ಯ ನಾಯ್ಕನಿಗೆ ಎರಡು ಬಾರಿ ಹಾವು ಕಚ್ಚಿದರೂ, ಆತ ಇದನ್ನು ಗಂಭೀರವಾಗಿ ತೆಗೆದುಕೊಳ್ಳದೆ ರಾತ್ರಿಯಲ್ಲಿ ಊಟ ಮಾಡಿ ಮಲಗಿದನು.

ಹಾವು ಕಚ್ಚಿದ ನೋವು ಮತ್ತು ಬೆನ್ನುಹುರಿಯ ನೋವನ್ನು ಮುಳ್ಳು ಚುಚ್ಚಿದಂತೆ ನಿರ್ಲಕ್ಷಿಸಿದ ಗಣ್ಯನಾಯ್ಕ ಬೆಳಗಾಗುವಷ್ಟರಲ್ಲಿ ಚಿರನಿದ್ರೆಗೆ ಜಾರಿದ್ದ.

ಕುಟುಂಬಸ್ಥರು ಮತ್ತು ಗ್ರಾಮದವರು ಆಘಾತಕ್ಕೊಳಗಾಗಿದ್ದರು

ಹಾವು ಕಚ್ಚಿದ ಅನುಮಾನವಿದ್ದಾಗ ಕೂಡಲೇ ವೈದ್ಯಕೀಯ ಚಿಕಿತ್ಸೆ ಪಡೆಯುವುದು ಎಷ್ಟು ಮುಖ್ಯ ಎಂಬುದನ್ನು ಈ ಘಟನೆ ತೋರಿಸುತ್ತದೆ.✍️✍️

WhatsApp Image 2025-06-21 at 19.57.59
Trending Now