March 3, 2026
Spread the love

ಈ ದಿನ ಪ್ರಾಥಮಿಕ ಆರೋಗ್ಯ ಕೇಂದ್ರ ಹಾರನಹಳ್ಳಿಯ ವಾಲ್ಕೇಶಪುರ ಮತ್ತು ಮುದುವಾಲ ಗ್ರಾಮಗಳಲ್ಲಿ ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಮನೆ ಮನೆ ಭೇಟಿ ನೀಡಿ ಡೆಂಗೀ, ಚಿಕೂನ್ ಗುನ್ಯ ಮತ್ತು ಇತರೆ ಸಾಂಕ್ರಮಿಕ ಖಾಯಿಲೆಗಳ ಬಗ್ಗೆ ಜನತೆಗೆ ಗೆ ಆರೋಗ್ಯ ಮಾಹಿತಿಯನ್ನು ನೀಡಿದರು.



ಇದರೊಂದಿಗೆ, ಗ್ರಾಮದಲ್ಲಿನ ಸಿಮೆಂಟ್ ತೊಟ್ಟಿಗಳಿಗೆ, ಬಾವಿಗಳಿಗೆ ಮತ್ತು ಕೆರೆಗಳಿಗೆ ಲಾರ್ವಾಹರಿ ಗಪ್ಪಿ ಮೀನುಗಳನ್ನು ಬಿಡಲಾಯಿತು. ಈ ಕಾರ್ಯಾಚರಣೆಯು ಸಾಂಕ್ರಮಿಕ ಖಾಯಿಲೆಗಳನ್ನು ತಡೆಗಟ್ಟಲು ಮತ್ತು ಜನತೆಗೆ  ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು ನೆರವಾಯಿತು.



ಕಾರ್ಯಕ್ರಮದಲ್ಲಿ ಆರೋಗ್ಯ ನಿರೀಕ್ಷಣಾಧಿಕಾರಿಗಳು ಸಂತೋಷ ಹೆಚ್., ವಿಜಯಕುಮಾರಯ್ಯ ಕೆ. ಜಿ., ಸಮುದಾಯ ಆರೋಗ್ಯ ಅಧಿಕಾರಿ ಪ್ರಶಾಂತ್, ಮತ್ತು ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿಗಳಾದ ದೀಪಾ ಅವರು ಉಪಸ್ಥಿತರಿದ್ದರು.

ಅವರ ಉಪಸ್ಥಿತಿಯಿಂದ ಈ ಕಾರ್ಯಕ್ರಮವು ಗ್ರಾಮಗಳಲ್ಲಿ  ಯಶಸ್ವಿಯಾಗಿ ನಡೆದು, ಜನರಲ್ಲಿ ಆರೋಗ್ಯದ ಬಗ್ಗೆ ಜಾಗೃತಿಯು ಹೆಚ್ಚಿತು.

Leave a Reply

Your email address will not be published. Required fields are marked *