December 12, 2025
Breaking News

ಶಿವಮೊಗ್ಗದಿಂದ ಪ್ರಯಾಗ್ ರಾಜ್ ಕುಂಭಮೇಳಕ್ಕೆ ವಿಶೇಷ ರೈಲು ವ್ಯವಸ್ಥೆ: ಭಕ್ತರಿಗೆ ಊಟದ ಸಂಕಷ್ಟ…!?

Spread the love



ಶಿವಮೊಗ್ಗ: ದಿನಾಂಕ 22-02-2025 ರಂದು ಶಿವಮೊಗ್ಗ ರೈಲು ನಿಲ್ದಾಣದಿಂದ ಪ್ರಯಾಗ್ ರಾಜ್ ಕುಂಭಮೇಳಕ್ಕೆ ವಿಶೇಷ ರೈಲು ವ್ಯವಸ್ಥೆಯನ್ನು ಜಿಲ್ಲಾ ಸಂಸದ ಬಿ. ವೈ. ರಾಘವೇಂದ್ರ ಅವರ ಪರಿಶ್ರಮದಿಂದ ಆರಂಭಿಸಲಾಯಿತು. ಈ ವ್ಯವಸ್ಥೆಯು ಶಿವಮೊಗ್ಗದ ಜನತೆಗೆ ತ್ರಿವೇಣಿ ಸಂಗಮದಲ್ಲಿ ಮುಂದುಟ್ಟಿ ಪುಣ್ಯಸ್ನಾನ ಮಾಡುವ ಅದ್ಭುತ ಅವಕಾಶ ಒದಗಿಸಿತು.

ಆದರೆ, ಈ ವಿಶೇಷ ಸೇವೆಯಲ್ಲೊಂದು ಪ್ರಮುಖ ಸಮಸ್ಯೆ ಎದುರಾಗಿದೆ. ರೈಲ್ವೆ ಇಲಾಖೆಯಿಂದ ಯಾವುದೇ ರೀತಿಯ ಊಟದ ವ್ಯವಸ್ಥೆ ಮಾಡದ ಕಾರಣ ಪ್ರಯಾಣಿಕರು ಹಸಿವಿನಿಂದ ಪರದಾಡುವ ಪರಿಸ್ಥಿತಿ ಎದುರಿಸಿದ್ದಾರೆ. ವಿಶೇಷ ರೈಲಿನಲ್ಲಿ ಹಣ ಕೊಟ್ಟು ಊಟ ಪಡೆಯುವ ವ್ಯವಸ್ಥೆಯೂ ಇರದೆ, ನೂರಾರು ಭಕ್ತರು ಊಟವಿಲ್ಲದೆ ಉಪವಾಸದಲ್ಲಿಯೇ ರಾತ್ರಿ ಕಳೆದಿದ್ದಾರೆ.

ಪ್ರಯಾಣಿಕರು ವಾಟ್ಸಾಪ್ ಮೂಲಕ ತಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ಈ ಅಸಮಾಧಾನವನ್ನು ಹಂಚಿಕೊಂಡಿದ್ದಾರೆ. ಅವರ ಪ್ರಕಾರ, ಕನಿಷ್ಟವಾಗಿ ಟೀ, ಕಾಫಿ ಅಥವಾ ಸ್ವಲ್ಪ ತಿಂಡಿಯಾದರೂ ದೊರಕುವಂತೆ ವ್ಯವಸ್ಥೆ ಮಾಡಬೇಕಿತ್ತು.

ಪ್ರಯಾಣಿಕರ ಸಂಕಷ್ಟವನ್ನು ಗಮನದಲ್ಲಿಟ್ಟುಕೊಂಡು, ಸಂಸದರು ಮತ್ತು ರೈಲ್ವೆ ಇಲಾಖೆ ಮುಂದಿನ ಪ್ರಯಾಣಗಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಹಸಿವಿನಿಂದ ಸಂಕಷ್ಟ ಅನುಭವಿಸಿದ ಪ್ರಯಾಣಿಕರು ವ್ಯವಸ್ಥೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

WhatsApp Image 2025-06-21 at 19.57.59