September 9, 2025
sathvikanudi - ch tech giant

ಬೃಹತ್ ಚರಂಡಿಗೆ ಹಾರಿದ ಕಾರು….

Spread the love

ತುಮಕೂರು

ಅಮಾನಿಕರೆ ಸಮೀಪ ಸಂಭವಿಸಿದ ಭೀಕರ ಘಟನೆ ಜನರಲ್ಲಿ ಆತಂಕ ಸೃಷ್ಟಿಸಿದೆ. ಹಳೇಪಾಳ್ಯದಿಂದ ಕೋಡಿಸರ್ಕಲ್‌ಗೆ ತೆರಳುತ್ತಿದ್ದ ಸ್ವಿಫ್ಟ್ ಕಾರು ನಿಯಂತ್ರಣ ತಪ್ಪಿ ಬೃಹತ್ ಚರಂಡಿಗೆ ಹಾರಿದ ಘಟನೆ ನಡೆದಿದ್ದು, ಕಾರಿನಲ್ಲಿ ಹಳೇಪಾಳ್ಯದ ಚೇತನ್ ಸೇರಿದಂತೆ ಮೂವರು ಯುವಕರು ಇದ್ದರು.  ಈ ಅಪಘಾತದಲ್ಲಿ ಮೂವರಿಗೆ ಸಣ್ಣಪುಟ್ಟ ಗಾಯಗಳು ಮಾತ್ರವಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕಳೆದ ಎರಡು ವರ್ಷಗಳ ಹಿಂದೆ ಕೆರೆ ಏರಿಯ ಪಕ್ಕದಲ್ಲಿ ಮಳೆನೀರು ನಿತಾರಣ ಮಾಡಲು ಬೃಹದಾಕಾರದ ಚರಂಡಿಯನ್ನು ತೆರೆಯಲಾಗಿತ್ತು. ಈ ಚರಂಡಿಗೆ ತಡೆಗೋಡೆ ಇಲ್ಲದ ಕಾರಣದಿಂದ ಈ ಅಪಘಾತ ಸಂಭವಿಸಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಈ ಘಟನೆಯ ನಂತರ ಸ್ಥಳೀಯರು ಚರಂಡಿಗೆ ತಕ್ಷಣ ತಡೆಗೋಡೆ ನಿರ್ಮಿಸಲು ಹಾಗೂ ಈ ರೀತಿಯ ಅಪಘಾತಗಳನ್ನು ತಡೆಯಲು ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

WhatsApp Image 2025-06-21 at 19.57.59
Trending Now