December 12, 2025
Breaking News

ರಸ್ತೆ ಅಪಘಾತ: ಸತೀಶನಾಯ್ಕ ಸಾವು 7 ವರ್ಷದ ಭರಣಿಗೆ ಗಂಭೀರ ಗಾಯ…

Spread the love

ಶಿವಮೊಗ್ಗ

ಮೈಸವಳ್ಳಿ : ದಿನಾಂಕ 21/06/2024, ಮಧ್ಯಾಹ್ನ 2.10 ಗಂಟೆ ಸುಮಾರಿಗೆ  ಸಮೀಪದ ಹಾರನಹಳ್ಳಿಗೆ ಹೋಗುವ ರಸ್ತೆಯಲ್ಲಿ ನಡೆದ ಭೀಕರ ಅಪಘಾತದಲ್ಲಿ, ಸತೀಶನಾಯ್ಕ (34) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇವರು ತಮ್ಮ ಸಂಬಂಧಿಕರ ಮಗಳಾದ ಭರಣಿಯನ್ನು (7) ಆಸ್ಪತ್ರೆಗೆ ಕರೆತರುತ್ತಿದ್ದರು.

ಸತೀಶನಾಯ್ಕ ಮತ್ತು ಭರಣಿ ಮೈಸವಳ್ಳಿ ಯಿಂದ ಹಾರನಹಳ್ಳಿಗೆ ರಾಜಯ್ಯ ರವರ ಬೈಕ್ (ಕೆ.ಎ.14.ಇ.ಕ್ಕೂ-1174) ನಲ್ಲಿ ತೆರಳಿದ್ದರು. ಮಾರ್ಗ ಮಧ್ಯದಲ್ಲಿ, ಅಪರಿಚಿತ ವಾಹನವು ಅವರ ಬೈಕಿಗೆ ಡಿಕ್ಕಿ ಹೊಡೆದು ಪರಾರಿಯಾದ ಕಾರಣ, ಇಬ್ಬರೂ ರಸ್ತೆಯ ಪಕ್ಕಕ್ಕೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು.



ಅಪಘಾತದ ತಕ್ಷಣವೇ ಸ್ಥಳೀಯರು ಮತ್ತು ಸತೀಶನ ಸಂಬಂಧಿಕರು ಸ್ಥಳಕ್ಕೆ ಧಾವಿಸಿ, ಗಾಯಾಳುಗಳನ್ನು ಆಸ್ಪತ್ರೆಗೆ ಕಳುಹಿಸಿದರು. ಆದರೆ, ಸತೀಶನು ತೀವ್ರ ಗಾಯಗಳಿಂದ ತಕ್ಷಣವೇ ಮೃತನಾಗಿದ್ದರು. ಭರಣಿಗೆ ತೀವ್ರ ಪೆಟ್ಟಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಈ ದುರ್ಘಟನೆಯ ಬಳಿಕ, ಸತೀಶನ ಕುಟುಂಬದವರು ಆಘಾತಕ್ಕೊಳಗಾಗಿದ್ದಾರೆ. ಅಪಘಾತಕ್ಕೆ ಕಾರಣವಾದ ಅಪರಿಚಿತ ವಾಹನ ಮತ್ತು ಚಾಲಕರನ್ನು ಶೀಘ್ರ ಪತ್ತೆ ಹಚ್ಚಿ, ಕಾನೂನು ಕ್ರಮ ಜರುಗಿಸಬೇಕೆಂದು ಅವರು ಕೋರುತ್ತಿದ್ದಾರೆ.

ಈ ಘಟನೆ ಕುರಿತಂತೆ ಸ್ಥಳೀಯ ಕುಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಿ, ತನಿಖೆ ಆರಂಭಿಸಿದ್ದಾರೆ.

WhatsApp Image 2025-06-21 at 19.57.59