September 9, 2025
sathvikanudi - ch tech giant

ಮುಡಾ ನಿವೇಶನ ಹಗರಣ,ತನಿಖೆ ವಾರ ಕಳೆದರೂ ಮುಡಾ ಅಧಿಕಾರಿಗಳ ಸುಳಿವೇ ಇಲ್ಲಾ…..!

Spread the love

ಮೈಸೂರು:

ಮುಡಾ ನಿವೇಶನ ಹಗರಣದ ತನಿಖಾ ಅಧಿಕಾರಿಗಳು ಎಷ್ಟೋ ದಿನಗಳಾದರೂ ಯಾವ ಸುಳಿವೂ ಸಿಕ್ಕಿಲ್ಲ. 50:50 ಅನುಪಾತದಡಿ ಮೂಡಾದಲ್ಲಿ ನಿವೇಶನಗಳನ್ನು ಹಂಚಿಕೆ ಮಾಡಿ ಸಾವಿರಾರು ಕೋಟಿ ರೂಪಾಯಿಗಳ ನಷ್ಟವನ್ನು ಉಂಟು ಮಾಡಿರುವ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮಾಡುತ್ತಿರುವ ಅಧಿಕಾರಿಗಳ ತಂಡ ವಾರ ಕಳೆದರೂ ಯಾವುದೇ ಸುಳಿವು ಕಂಡುಕೊಳ್ಳಲು ವಿಫಲವಾಗಿದೆ. ಐಎಎಸ್ ಅಧಿಕಾರಿ ವೆಂಕಟಾಚಲಪತಿ ನೇತೃತ್ವದ ತನಿಖಾ ಸಮಿತಿಯು ಮುಡಾ ಕಚೇರಿಯಲ್ಲಿ ಕಡತಗಳನ್ನು ಪರಿಶೀಲಿಸುತ್ತಿದ್ದರೂ, ಯಾವುದೇ ಪ್ರಗತಿಯಿಲ್ಲ. ನಿವೃತ್ತ ನ್ಯಾಯಮೂರ್ತಿ ನೇತೃತ್ವದ ತನಿಖಾ ಆಯೋಗವನ್ನೂ ರಚಿಸಲಾಗಿತ್ತು, ಆದರೆ ಇದರಿಂದಲೂ ಯಾವುದೇ ಬೆಳವಣಿಗೆಯಿಲ್ಲ.

ವಾರದ ಹಿಂದೆ ತನಿಖೆ ನಡೆಸುತ್ತಿದ್ದ ಮುಡಾ ಕಚೇರಿ ಬಾಗಿಲು ಬಂದ್ ಮಾಡಿ ಹೊರಹೋಗಿದ್ದ ಅಧಿಕಾರಿಗಳು, ನಂತರ ಇನ್ನೂ ಸುಳಿದಿಲ್ಲ. ಈ ಹಗರಣಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರ ನಿರೀಕ್ಷೆಗಳು ಹೆಚ್ಚಾಗಿದ್ದು, ಯಾರು ತಪ್ಪಿತಸ್ಥರು ಎಂಬುದರ ಬಗ್ಗೆ ಸ್ಪಷ್ಟ ಉತ್ತರಕ್ಕಾಗಿ ಕಾದಿದ್ದಾರೆ.

ಈ ಹಗರಣದ ಗಂಭೀರತೆಯನ್ನು ಗಮನದಲ್ಲಿ ಇಟ್ಟುಕೊಂಡು, ತನಿಖಾ ಪ್ರಕ್ರಿಯೆ ಹೆಚ್ಚು ಸರಳವಾಗಿ ಮತ್ತು ವೇಗವಾಗಿ ನಡೆಯಬೇಕೆಂದು ಜನರು ಆಗ್ರಹಿಸುತ್ತಿದ್ದಾರೆ. ಮತ್ತೊಂದು ವಾರದ ನಂತರವೂ ಯಾವುದೇ ಸುಳಿವು ದೊರಕದೆ ಇರುವ ಈ ಪ್ರಕರಣವು ಇನ್ನೂ ಎಷ್ಟು ದಿನಗಳು ಹೀಗೆ ಮುಂದುವರೆಯುತ್ತದೆ ಎಂಬುದು ಚಿಂತೆಯ ವಿಷಯವಾಗಿದೆ.

WhatsApp Image 2025-06-21 at 19.57.59
Trending Now