March 3, 2026
Spread the love


ತುಮಕೂರು:
ಕಳ್ಳತನ ಮಾಡಿದ ಆಭರಣಗಳನ್ನು ಕಳ್ಳರಿಂದ ಕಡಿಮೆ ಬೆಲೆ ಕೊಂಡುಕೊಳ್ಳುತ್ತಿದ್ದ ಆರೋಪದ ಮೇಲೆ ಅಟ್ಟಿಕಾಬಾಬು ಅಲಿಯಾಸ್ ಪಿ. ಎಸ್. ಅಯ್ಯಬ್(44)ನನ್ನು ತುರುವೇಕೆರೆ ಪೊಲೀಸರು ಬುಧವಾರ ಬಂಧಿಸಿದ್ದಾರೆ.

ತುರುವೇಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳಿಂದ ಚಿನ್ನ ಖರೀದಿಸಿದ ಅಟ್ಟಿಕಾಬಾಬು ಬೆಂಗಳೂರಿನ ಅವರ ಮನೆಯಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

ಪೊಲೀಸರು ಅವರ ಮನೆಯಲ್ಲಿ ನಡೆಸಿದ ಶೋಧದ ವೇಳೆ ಹಲವು ಕಳ್ಳತನದ ಚಿನ್ನದ ಆಭರಣಗಳು ಹಾಗೂ ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಅಟ್ಟಿಕಾಬಾಬು ತಮ್ಮ ಚಿನ್ನದ ವ್ಯಾಪಾರವನ್ನು ಮುಚ್ಚಿದ ನಂತರ ಅಕ್ರಮ ಚಿನ್ನ ವ್ಯಾಪಾರದ ಜಾಲವನ್ನು ರೂಪಿಸಿ ಕಳ್ಳತನದ ಚಿನ್ನವನ್ನು ಖರೀದಿಸುತ್ತಿದ್ದ ಎನ್ನಲಾಗಿದೆ.

ಇವರ ಬಂಧನದಿಂದ ಚಿನ್ನ ಕಳ್ಳತನದ ಪ್ರಕರಣಗಳಿಗೆ ಸಂಬಂಧಿಸಿದಂತೆ ಮತ್ತಷ್ಟು ಸುಳಿವುಗಳನ್ನು ಪಡೆಯಲು ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.

Leave a Reply

Your email address will not be published. Required fields are marked *