December 16, 2025
Breaking News

ಕೊರಟಗೆರೆ: ತಾಲ್ಲೂಕಿನಲ್ಲಿ ನರೇಗಾ ಕಾಮಗಾರಿಗೆ ಅಧಿಕಾರಿಗಳ ಮೆಚ್ಚುಗೆ

Spread the love



ಕೊರಟಗೆರೆ ತಾಲ್ಲೂಕು ಬೂದಗವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಂಡೇಹಳ್ಳಿ ಗ್ರಾಮದ ರೈತ ದಯಾನಂದ್‌ ರವರ ಜಮೀನಿನಲ್ಲಿ ನರೇಗಾ (ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ) ಯೋಜನೆಯಡಿ ನಿರ್ಮಿಸಿದ ಬದುಗಳಲ್ಲಿ ಮಳೆ ನೀರು ತುಂಬಿದ್ದು, ಇದರಿಂದ ರೈತನ ಮೊಗದಲ್ಲಿ ಮಂದಹಾಸ ಮೂಡಿದೆ.

ತಾಲೂಕಿನ ನಾನಾ ಭಾಗಗಳಲ್ಲಿ ನರೇಗಾ ಯೋಜನೆ ಅಡಿ ಹಲವು ಕಾಮಗಾರಿಗಳನ್ನು ನಡೆಸಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಯ ಜೊತೆಗೆ ನೀರಿನ ಶೇಖರಣೆಗೆ ಸಹಾಯವಾಗಿದೆ. ಕಳೆದ ಎರಡು ಮೂರು ದಿನಗಳಿಂದ ಬೀಳುತ್ತಿರುವ ಮಳೆಗೆ ಈ ಬದುಗಳಲ್ಲಿ ನೀರು ಶೇಖರಣೆಯಾಗಿದ್ದು, ರೈತರು ಹಾಗೂ ಸ್ಥಳೀಯರು ಕೃತಜ್ಞತೆಯನ್ನು ವ್ಯಕ್ತಪಡಿಸುತ್ತಿದ್ದಾರೆ.

ನರೇಗಾ ಯೋಜನೆಯಡಿ ನಡೆಯುತ್ತಿರುವ ಕಾಮಗಾರಿಗಳು ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಶಕ್ತಿಯುಕ್ತವಾಗಿ ಸುತ್ತಮುತ್ತಲಿನ ಜನರಿಂದ ಪ್ರಶಂಸೆ ಪಡೆಯುತ್ತಿವೆ. ನೀರಿನ ಶೇಖರಣೆಯಿಂದಾಗಿ ಬೆಳೆಗಳಿಗೆ ನೀರಿನ ಪೂರೈಕೆ ಸುಲಭವಾಗಿದ್ದು, ಮುಂದಿನ ಬೆಳೆಗಾಲದಲ್ಲಿ ಉತ್ತಮ ಉಳಿತಾಯದ ನಿರೀಕ್ಷೆಯಿದೆ.

ಈ ಯೋಜನೆಗೆ ಸಂಬಂಧಿಸಿದ ಅಧಿಕಾರಿಗಳು ಬದುಗಳ ನಿರ್ಮಾಣವನ್ನು ಸಮರ್ಥವಾಗಿ ಮಾಡಿದ್ದು, ಗ್ರಾಮಸ್ಥರು ಮತ್ತು ರೈತರಿಂದ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇಂತಹ ಯೋಜನೆಗಳು ಮುಂದುವರಿಯಬೇಕೆಂದು ಮತ್ತು ಇನ್ನಷ್ಟು ಗ್ರಾಮೀಣ ಅಭಿವೃದ್ಧಿ ಕಾರ್ಯಗಳು ನಡೆಯಬೇಕೆಂದು ಸ್ಥಳೀಯರು ಆಶಿಸಿದ್ದಾರೆ.

WhatsApp Image 2025-06-21 at 19.57.59