December 12, 2025
Breaking News

ಆಸ್ಪತ್ರೆಯ ನಿರ್ಲಕ್ಷ್ಯಕ್ಕೆ ಬಾಲಕಿ ಬಲಿಯಾಗಿದೆಯಾ? – ಆರೋಗ್ಯ ಸೇವೆ ಸುಧಾರಣೆಗೆ ಗಜೇಂದ್ರ ಯಾದವ್ ಆಗ್ರಹ

Spread the love


ಶಿವಮೊಗ್ಗ ಜಿಲ್ಲೆ:

ಆನಂದಪುರ (ದೊಡ್ಡ ಹೋಬಳಿ): ಮಲಂದೂರು ಗ್ರಾಮದ ಹತ್ತನೇ ತರಗತಿ ವಿದ್ಯಾರ್ಥಿನಿ ಕುಮಾರಿ ಐಶ್ವರ್ಯ (ವಯಸ್ಸು ಸುಮಾರು 15) ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು ಉತ್ತಮ ಚಿಕಿತ್ಸೆ ಲಭಿಸದೆ, ಸೋಮವಾರ ಮಧ್ಯರಾತ್ರಿ  ಮೃತಪಟ್ಟಿರುವ ದುರ್ಘಟನೆ ಸ್ಥಳೀಯ ಸಾರ್ವಜನಿಕ ಮಟ್ಟದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

ಐಶ್ವರ್ಯ ಕಳೆದ ಕೆಲವು ದಿನಗಳಿಂದ ಅಸ್ವಸ್ಥತೆಯಿಂದ ಬಳಲುತ್ತಿದ್ದು, ಆನಂದಪುರದ ಸಾರ್ವಜನಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಲಾಗಿತ್ತು. ಆದರೆ ಸಂಬಂಧಿಕರ ಪ್ರಕಾರ, ಆಸ್ಪತ್ರೆಯಲ್ಲಿ ವೈದ್ಯರು ಹಾಗೂ ಸಿಬ್ಬಂದಿಯ ನಿರ್ಲಕ್ಷ್ಯದಿಂದಾಗಿ ಸರಿಯಾದ ಸಮಯದಲ್ಲಿ ತಪಾಸಣೆ ಅಥವಾ ಚಿಕಿತ್ಸೆ ನಡೆಯಲಿಲ್ಲ. ಇದನ್ನು ಗಂಭೀರವಾಗಿ ಗಮನಿಸಿದ ಮಲಂದೂರು ಗ್ರಾಮದ ಮಾಜಿ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಗಜೇಂದ್ರ ಯಾದವ್ ಅವರು ಮಂಗಳವಾರ ನಡೆದ ಸಾರ್ವಜನಿಕ ಸಭೆ ಹಾಗೂ ಕೆಡಿಪಿ (ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ) ಸಭೆಯಲ್ಲಿ ಪ್ರಸ್ತಾಪಿಸಿದರು.

“ಬರುವ ರೋಗಿಗಳನ್ನು ಸಮಯಕ್ಕೆ ಸರಿಯಾಗಿ ಪರಿಶೀಲನೆ ಮಾಡಿದ್ದರೆ, ಇಂತಹ ದುರ್ಘಟನೆ ಸಂಭವಿಸದೆ ಇರಬಹುದಿತ್ತು. ಆರೋಗ್ಯ ಕೇಂದ್ರದ ಸಿಬ್ಬಂದಿ ಹಾಗೂ ವೈದ್ಯರ ದೃಷ್ಠಿಕೋನದ ಬದಲಾವಣೆ ಅತ್ಯಾವಶ್ಯಕ. ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಸೇವೆ ಮಾತ್ರವಲ್ಲದೆ, ಅದರ ಗುಣಮಟ್ಟವೂ ಹೆಚ್ಚು ಮುಖ್ಯ” ಎಂದು ಅವರು ಧ್ವನಿಮಾಡಿದರು.

ಈ ಘಟನೆ ಬಳಿಕ ಸ್ಥಳೀಯರು ಆರೋಗ್ಯ ಇಲಾಖೆಯ ಅಧಿಕಾರಿಗಳಿಂದ ಸೂಕ್ತ ತನಿಖೆ ನಡೆಸುವಂತೆ ಹಾಗೂ ಭವಿಷ್ಯದಲ್ಲಿ ಇಂತಹ ಅನಾಹುತಗಳು ಸಂಭವಿಸದಂತೆ ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

WhatsApp Image 2025-06-21 at 19.57.59