December 12, 2025
Breaking News

ಭ್ರಷ್ಟಾಚಾರದ ಆರೋಪ: ಭಾಲ್ಕಿ ಸಿಡಿಪಿಒ ಅಮಾನತಿಗೆ ಆಗ್ರಹ..!

Spread the love



ಬೀದರ್ :
2024-25 ನೇ ಸಾಲಿನ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ನೇಮಕಾತಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪ ಹೊತ್ತಿರುವ ಭಾಲ್ಕಿ ತಾಲ್ಲೂಕು ಸಿಡಿಪಿಒ ಅವರನ್ನು ತಕ್ಷಣ ಅಮಾನತುಗೊಳಿಸಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಭಾರತೀಯ ದಲಿತ್ ಪ್ಯಾಂಥರ್ ಸಂಘಟನೆ ಆಗ್ರಹಿಸಿದೆ.

ಸಂಘಟನೆಯ ಪದಾಧಿಕಾರಿಗಳು ಭಾಲ್ಕಿ ತಹಶೀಲ್ದಾರ್ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ. ಅವರ ಪ್ರಕಾರ, ನೇಮಕಾತಿಗೆ ಸಂಬಂಧಿಸಿದಂತೆ ಮೊದಲು ಪ್ರಕಟಿಸಿದ ಆಯ್ಕೆ ಪಟ್ಟಿಯನ್ನು ರದ್ದುಪಡಿಸಿ, ಮಾರ್ಚ್ ತಿಂಗಳಲ್ಲಿ ಹೊಸ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಈ ಪಟ್ಟಿಯಲ್ಲಿ ಭಾಲ್ಕಿಯ ಸಿಡಿಪಿಒ ಅವರು ತಮ್ಮ ಸ್ವಂತ ಆಸಕ್ತಿಯೊಂದಿಗೆ ಅನರ್ಹ ಅಭ್ಯರ್ಥಿಗಳನ್ನು ಶಿಫಾರಸು ಮಾಡಿದ್ದು, ಆ ಮೂಲಕ ನಿಗದಿತ ನಿಯಮ ಉಲ್ಲಂಘಿಸಿದ್ದಾರೆ ಎನ್ನಲಾಗಿದೆ.

ಹಣ ಪಡೆದು ಕಡಿಮೆ ಅಂಕ ಪಡೆದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ, ಅರ್ಹ ಅಭ್ಯರ್ಥಿಗಳನ್ನು ತಿರಸ್ಕರಿಸಲಾಗಿದೆ ಎಂಬ ಆರೋಪವೂ ಇದೆ. ಇದು ಪೂರಕವಾಗಿ ಸರ್ಕಾರಿ ನಿಯಮಗಳಿಗೆ ವಿರುದ್ಧವಾಗಿದೆ ಎಂದು ಆರೋಪಪಡಿಸಲಾಗಿದೆ.

ಈ ಸಂದರ್ಭದಲ್ಲಿ ಸಂಘಟನೆಯ ರಾಜ್ಯ ಕಾರ್ಯದರ್ಶಿ ಮನೋಹರ್ ಮೋರೆ, ಅಧ್ಯಕ್ಷ ಕೈಲಾಸ್ ಭಾವಿಕಟ್ಟಿ, ಪ್ರಧಾನ ಕಾರ್ಯದರ್ಶಿ ಮಾರುತಿ ಭಾವಿಕಟ್ಟಿ, ವಿನಾಯಕ ಫುಲೆ, ಪ್ರಕಾಶ್ ಭಾವಿಕಟ್ಟಿ, ರಾಜಕುಮಾರ್ ಉಜ್ವಲೆ, ಸುರೇಶ್ ಸುತ್ತಾರ್, ಬುದ್ಧಾನಂದ್ ಸಿಂಧೆ, ಪಾಂಡುರಂಗ್ ಮತ್ತು ಗೌತಮ್ ಫುಲೆ ಉಪಸ್ಥಿತರಿದ್ದರು.



WhatsApp Image 2025-06-21 at 19.57.59