
ಆಲೂರು: ಬೈರಾಪುರ ಗ್ರಾಮದಲ್ಲಿರುವ ಆಲೂರು ವಲಯ ಅರಣ್ಯಾಧಿಕಾರಿಗಳ ಕಚೇರಿಯ ಬಳಿಯಲ್ಲಿ ನಿರ್ಮಿಸಲಾದ ಅರಣ್ಯ ಇಲಾಖೆಯ ವಸತಿಗೃಹಗಳು ಇದೀಗ ಸಂಪೂರ್ಣ ನಿರ್ಲಕ್ಷ್ಯದಿಂದ ‘ಭೂತ ಬಂಗಲೆ’ಗಳಂತೆ ಪಾಳು ಬಿದ್ದಿವೆ. ಲಕ್ಷಾಂತರ ರೂ. ವೆಚ್ಚ ಮಾಡಿ ಸರ್ಕಾರ ನಿರ್ಮಿಸಿದ ಈ ಕಟ್ಟಡಗಳಲ್ಲಿ ಯಾವುದೇ ಸಿಬ್ಬಂದಿ ವಾಸಕ್ಕೆ ಬರುತ್ತಿಲ್ಲವೇ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಎದ್ದಿದೆ.

ಆಲೂರು ವಲಯ ಅರಣ್ಯಾಧಿಕಾರಿಗಳ ಕಚೇರಿ ಬೈರಾಪುರದಲ್ಲಿದ್ದು, ಸಿಬ್ಬಂದಿಯ ವಾಸಕ್ಕೆ ಅನುಕೂಲವಾಗಲು ರಾಜ್ಯ ಹೆದ್ದಾರಿ ಪಕ್ಕದಲ್ಲೇ ವಸತಿಗೃಹಗಳನ್ನು ನಿರ್ಮಿಸಲಾಗಿತ್ತು. ಆದರೆ ಅಧಿಕಾರಿಗಳು ನಗರ ಪ್ರದೇಶದಲ್ಲೇ ನೆಲೆಸಿರುವುದರಿಂದ, ಬಳಕೆ ಇಲ್ಲದ ಕಟ್ಟಡಗಳ ಸುತ್ತ ಮುಳ್ಳಿನ ಗಿಡಗಂಟೆಗಳು, ಕುರುಚಲುಗಳು ಬೆಳೆದು, ರಾತ್ರಿ ವೇಳೆಯಲ್ಲಿ ಅಹಿತಕರ ಚಟುವಟಿಕೆಗಳು ನಡೆಯುವ ತಾಣವಾಗಿ ಮಾರ್ಪಟ್ಟಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವರದಿ : ಯೋಗೇಶ್ ಬಿ ಜೆ
